Monday, April 25, 2011

ಬೆಳಿಗ್ಗೆ ರಾಮಾಯಣ - ರಾತ್ರಿ ಮಹಾಭಾರತ
ಇದು ನನ್ನ ದಿನ ನಿತ್ಯದ ಭಾಗವಾಗಿ ಹೋಗಿದೆ.
ಸರಿಯಾಗಿ ಬೆಳಿಗ್ಗೆ 7 ಗಂಟೆಗೆ tune ಮಾಡಿದ್ರೆ ಸರಿ ಸುಮಾರು 7 .20 ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಮುಗಿತು; radio ನಲ್ಲಿ ರಾಮಾಯಣ.
ರಾತ್ರಿ ಜ್ಞಾನವಾಣಿಯಲ್ಲಿ 9.30 ರಿಂದ ಕುಮಾರ ಭಾರತ.
ಮತ್ತೂರು ಕೃಷ್ಣಮೂರ್ತಿಗಳು ಮತ್ತು ಕೇಶವರಾಯರ ವಾಚನ

ಈಗ ಕೇಳಿ Fever Radio ರಾಮಾಯಣ
श्री रामचंद्र कृपालु भजमन हरण भव भय दारुणं ! .
कंज लोचना कंज मुख कर कंज पद कंजारुणं !!
ನಾನು ಕಾಲ ...
ವಸಿಷ್ಠರು ರಾಮ ಭರತರಿಗೆ "ಎಲ್ಲಿ ಭಾವುಕತೆಯ ಭವ ಸಾಗರವೇ ಹರಿಯುತ್ತದೆಯೋ ಅಲ್ಲಿ ನಿರ್ಣಯಗಳನ್ನು ತೆಗದುಕೊಲ್ಲುವುದು ಅಸಾಧ್ಯ " ಎಂದರು. ಎಷ್ಟು ನಿಜ.
ಮುಂದೇನಾಗುವುದು ಕೇಳೋಣ.
..................

Chocalate ಹೀರೋ  ಶ್ರೀನಗರ ಕಿಟ್ಟಿ ರಾಮನ ಪಾತ್ರದಲ್ಲಿ
ಬಿ ಜಯಶ್ರೀಯು ಮಂಥರೆಯೇ ಸರಿ!
ದಿಲೀಪ್ ರಾಜ್ ಹನುಮನು,
ಕಿಶೋರಿ ಬಲ್ಲಾಳ್ ಶಬರಿಯಾಗಿ ಕಾದಿಹಳು ಜೊತೆಯಲ್ಲಿಯೇ ಅಂಜನಾದೇವಿಯು ಆಗಿ ಹೋದಳು !
ಲಂಕೇಶನಾಗಿ ಶರತ್ ಲೋಹಿತಾಶ್ವನಿಗಿಂತ ಮಿಗಿಲು ಉಂಟೆ?

ಸಂಸಾರ ನೌಕೆ ಹರಿವಿಲ್ಲದೆ ನಿಂತಿದೆ
ಮುರುಕು ಸಂಸಾರ ಹರಿ ಚಿತ್ತವೆ?
 ದುಃಖವ ಕೊಡುವೆ ಕೊಡ ಕೊಡ ಕೊಡುವೆ
ಕೊಟ್ಟರೆ ಉಳಿಸುವೆ ಪ್ರಾಣ
ಆ ಪ್ರಾಣವಿದ್ದು ಏನು ಪ್ರಯೋಜನ?
ಇಲ್ಲವೋ ಇಲ್ಲ ಆತ್ಮವೇ ರಾಮ !
ರಾಮ ಸೇತು ತಯಾರಾಗಿದೆ
ರಾಮ - ರಾವಣ ಯುದ್ದ ಸನ್ನಿಹಿತವಾಗಿದೆ
ಮುಂದೇನಾಗುವುದೋ ?
ಮತ್ತೊಮ್ಮೆ ಭೇಟಿಯಾಗೋಣ
ಪ್ರತೀ ದಿನ ಕೇಳ್ತಾ ಇರಿ Fever Radio ರಾಮಾಯಣ
ಆದರೆ ಮನ ಪಾವನ ಜಗ ಪಾವನ

Friday, April 1, 2011